ಮನುಷ್ಯನಾಗಿ ಅಮಾನುಷವಾಗಿ ಹುಟ್ಟುಗಮ್ಯವನ್ನು ಮರೆತು ಸಾವಿನ ನಡೆಗೆ ಮುನ್ನಡೆಯುವ ಈ ಮನುಜ ಕುಲಕ್ಕೆ....... ಏನು ಹೇಳಲಿ..... ನಾನೇನು ಹೇಳಲಿ....!
ನೀತಿ, ನ್ಯಾಯ, ಧರ್ಮ, ಸತ್ಯಗಳನ್ನು ಮರೆಮಾಚಿ ಸ್ವಾರ್ಥ, ಕೋಪ, ಅಸೂಯೆ, ಸಾರ್ವಭೌಮತ್ವಗಲಿಗಾಗಿ ತಾನೊಂದು ಬುದ್ಧಿಜೀವಿಯೆಂದು ಮರೆತು ನಿರ್ಜೀವಿಯಾಗಿ ಬಾಳುತ್ತಿರುವ ಈ ಮನುಜ ಕುಲಕ್ಕೆ..... ಏನು ಹೇಳಲಿ....ನಾನೇನು ಹೇಳಲಿ......!!
ಕುಲ, ಜಾತಿ, ಧರ್ಮ, ಭೇದಗಳನ್ನು ಮರೆತು ಪ್ರೀತಿ, ವಿಶ್ವಾಸ, ನಂಬಿಕೆ, ತ್ಯಾಗಗಳನ್ನು ಬೆಳೆಸಿದರೆ... ನೀ
ಮನುಷ್ಯನಾಗಲ್ಲವೇ, ಈ ಮನುಜ ಕುಲಕ್ಕೆ ಆದರ್ಶ ಪುರುಷನಾಗಲ್ಲವೇ..... ಏನು ಹೇಳಲಿ.... ಮುಂದೇನು ಹೇಳಲಿ.....!!!
ಹೆಣ್ಣು, ಹೊನ್ನು, ಮಣ್ಣುನ್ನು ತೊರೆದು, ಕಾಮ, ಕ್ರೋದ, ದ್ವೇಷಗಳನ್ನು ಜಯಸಿದರೆ......ನೀ
ಯುಗಪುರುಷನಾಗಲ್ಲವೇ.... ಈ ಮನುಜ ಕುಲಕ್ಕೆ ವರ್ಷಗಳ ಹರ್ಷ ತರುವವನಾಗಲ್ಲವೇ......!!!!
ಏನು ಹೇಳಲಿ..... ಮುಂದೇನು ಹೇಳಲಿ..... ಮನುಜ ಕುಲವು ತನ್ನಲ್ಲಿ ತಾನೇ..... ಅಂತವಾಗದಿರಲಿ......!!!!!
No comments:
Post a Comment